ಶುಕ್ರವಾರ, ಸೆಪ್ಟೆಂಬರ್ 7, 2012

ಧ್ಯಾನ

ಧ್ಯಾನ  ಅಂದ ಕೂಡಲೇ ಒಂದು ತರಹದ ಅಲೌಕಿಕತೆ ನಮ್ಮನ್ನು ಆವರಿಸಿಕೊಳ್ಳುತ್ತದೆ.ಈ ಧ್ಯಾನವನ್ನು

ಒಂದು ವಸ್ತು ಇಲ್ಲವೇ ದೇವರಲ್ಲಿ  ತೋರುವ ತಾದ್ಯಾತ್ಮ ಎಂದೇ ಭಾವಿಸುವುದುಂಟು. ಇಲ್ಲಿ

ವಸ್ತುವಿನ ಮೇಲಿನ ಕೇಂದ್ರಿಕೃತ ಮನಸ್ಸು ಅಲ್ಲಿಯೇ ಲೀನವಾಗತಕ್ಕದ್ದು. ಅಂದಾಗ ಒಂದು ಸಂಗತಿಯ

ಅಂತರ್ಗತ ದರ್ಶನ ನಮಗಾಗಬಹುದು.  'ಮನವೆಂಬ ಮರ್ಕಟ ' ಎಲ್ಲಿಯವರೆಗೆ ಸ್ತಿರಗೊಳಿಸಲಾಗುತ್ತದೆ

ಎನ್ನುವುದು ಧ್ಯಾನದ ಸಮಯವನ್ನು ಮತ್ತು  ಅದರ ಆಳವನ್ನು ನಿರ್ಧರಿಸುತ್ತದೆ.  ಏಕಾಂತದಲ್ಲಿ ಕುಳಿತ ವ್ಯಕ್ತಿ

ಧ್ಯಾನಾಸಕ್ತನಾಗಿದ್ದಾನೆ  ಎಂದು ನಿರ್ಣಯಿಸುವುದು ಸಾಧುವಾಗಲಾರದು. ಯೋಗಾಭ್ಯಾಸದಲ್ಲಿ  ಧ್ಯಾನಕ್ಕೆ

ಅತ್ಯುನ್ನತ  ಸ್ಥಾನವಿದೆ. ಧ್ಯಾನದಿಂದ ವ್ಯಕ್ತಿಯೊಬ್ಬ ಅಸಾಮಾನ್ಯ ಶಕ್ತಿಯನ್ನು ಪಡೆಯಬಹುದು. ಮನಸ್ಸನ್ನು

ಹತೋಟಿಯಲ್ಲಿಡಬಹುದು. ಕುಂಡಿಲಿನಿ  ಮೊದಲಾದ  ಚಕ್ರಗಳನ್ನು ಉದ್ದೀಪನಗೊಳಿಸಿ ಉನ್ನತ ಸ್ಥಾನಕ್ಕೆ

ಎರಬಹುದೆನ್ನುತ್ತದೆ  ಯೋಗ.

ಇದನ್ನು  ಸಾಧಿಸಿದ್ಧರು ನಮ್ಮ ಪೂರ್ವಜರು. ಈಗಲೂ ಧ್ಯಾನದ ಮಹತ್ವ ಕಡಿಮೆಯಾಗಿಲ್ಲ. ತಪಸ್ಸು ಈ

ಧ್ಯಾನದ  ರೂಪವಷ್ಟೇ . ಇನ್ನೂ ಅಪರಿಚಿತವಾಗಿಯೇ ಉಳಿದ ಮನಸ್ಸಿನ ಅಂತರಾಳಕ್ಕೊಂದು ಪಯಣ

ಹೊರಡುವಿರಾದರೆ ಅದು ಧ್ಯಾನದ ಮೂಲಕವೇ.

ಧ್ಯಾನ ದಿನದ ಭಾಗವಾಗಿರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನನ್ನ ಬ್ಲಾಗ್ ಪಟ್ಟಿ