ಮತ್ಸರವನ್ನು ನಾನು ಒಂದು ವಿಭಿನ್ನ ದೃಷ್ಟಿಯ ಮೊಲಕ ನೋಡ ಬಯಸುತ್ತೇನೆ. ನಾವು ಮಾಡಲಸಾಧ್ಯವಾದುದ್ದನ್ನು
ಬೇರೊಬ್ಬರು ಮಾಡಿದಾಗ ಉಂಟಾಗುವ ಕೀಳಿರಿಮೆಯೇ ಮತ್ಸರವೆನ್ನಬಹುದು. ಅಂದರೆ ಪೈಪೋಟಿಯಲ್ಲಿ
ಅಸಾಧ್ಯವಾದಾಗ ಮೂಡುವ ಭಾವ. ಏಳಿಗೆಯನ್ನು ಸಹಿಸದ ಸ್ವಭಾವ. ಇದು ವಯಕ್ತಿಕವಾದರೂ ಪರಿಣಾಮ
ಘೋರವಾದೀತು . ಬೀಜಾಸುರನತೆ ಒಂದಕ್ಕೆ ಮತ್ತೊಂದು ಜೋಡಿಸುತ್ತ ನಾಶದತ್ತ ಮುನ್ನಡೆಸುತ್ತದೆ.
ಸ್ವನಾಶವಲ್ಲದೆ ಪರ ನಾಶಕ್ಕೂ ಕಾರಣವಾಗುವ ಗುಣ. ಇದಕ್ಕೆ ಕಾರಣ ಸಹಿಷ್ಣುತೆಯ ಅಭಾವ. ನಾನು
ಮಾಡದ್ದನ್ನು ಬೇರೆಯವರೂ ಮಾಡಬಾರದೆಂದ ಮನೋಸ್ಥಿತಿ. ಕೆಲವೊಮ್ಮೆ ಇದು ಸಾಧಕವು ಆಗಬಹುದು.
ಮತ್ಸರದಲ್ಲೇ ಬೇರೆಯವರನ್ನು ಮೀರಿಸುವ ಛಲ ಮೂಡಿದರೆ ಹೆಚ್ಚಿನದನ್ನೇ ಸಾಧಿಸಲೂ ಬಹುದು.ಇಲ್ಲವೇ
ಬೇರೆಯವರನ್ನು ಹೇಗಾದರೂ ನಾಶಮಾಡುವ ಬುದ್ಧಿ ಬಂದಿತೋ ಅದು ಸರ್ವನಾಶದ ಮುನ್ನುಡಿ.
ಗುಣಕ್ಕಿಲ್ಲ ಮತ್ಸರ.
ಮತ್ಸರದ ಬದಲು ಹೆಮ್ಮೆ ಬೆಳೆಸಿಕೊಳ್ಳೋಣ.
ಬೇರೊಬ್ಬರು ಮಾಡಿದಾಗ ಉಂಟಾಗುವ ಕೀಳಿರಿಮೆಯೇ ಮತ್ಸರವೆನ್ನಬಹುದು. ಅಂದರೆ ಪೈಪೋಟಿಯಲ್ಲಿ
ಅಸಾಧ್ಯವಾದಾಗ ಮೂಡುವ ಭಾವ. ಏಳಿಗೆಯನ್ನು ಸಹಿಸದ ಸ್ವಭಾವ. ಇದು ವಯಕ್ತಿಕವಾದರೂ ಪರಿಣಾಮ
ಘೋರವಾದೀತು . ಬೀಜಾಸುರನತೆ ಒಂದಕ್ಕೆ ಮತ್ತೊಂದು ಜೋಡಿಸುತ್ತ ನಾಶದತ್ತ ಮುನ್ನಡೆಸುತ್ತದೆ.
ಸ್ವನಾಶವಲ್ಲದೆ ಪರ ನಾಶಕ್ಕೂ ಕಾರಣವಾಗುವ ಗುಣ. ಇದಕ್ಕೆ ಕಾರಣ ಸಹಿಷ್ಣುತೆಯ ಅಭಾವ. ನಾನು
ಮಾಡದ್ದನ್ನು ಬೇರೆಯವರೂ ಮಾಡಬಾರದೆಂದ ಮನೋಸ್ಥಿತಿ. ಕೆಲವೊಮ್ಮೆ ಇದು ಸಾಧಕವು ಆಗಬಹುದು.
ಮತ್ಸರದಲ್ಲೇ ಬೇರೆಯವರನ್ನು ಮೀರಿಸುವ ಛಲ ಮೂಡಿದರೆ ಹೆಚ್ಚಿನದನ್ನೇ ಸಾಧಿಸಲೂ ಬಹುದು.ಇಲ್ಲವೇ
ಬೇರೆಯವರನ್ನು ಹೇಗಾದರೂ ನಾಶಮಾಡುವ ಬುದ್ಧಿ ಬಂದಿತೋ ಅದು ಸರ್ವನಾಶದ ಮುನ್ನುಡಿ.
ಗುಣಕ್ಕಿಲ್ಲ ಮತ್ಸರ.
ಮತ್ಸರದ ಬದಲು ಹೆಮ್ಮೆ ಬೆಳೆಸಿಕೊಳ್ಳೋಣ.