ಶುಕ್ರವಾರ, ಆಗಸ್ಟ್ 10, 2012

ಹೊಸ ಬೆಳಕಿನೊಂದಿಗೆ

ಹೊಸ ಬೆಳಕಿನೊಂದಿಗೆ   ದಿನವನ್ನು ಪ್ರಾರಂಭಿಸುತ್ತಿದ್ದೇನೆ .

ಅಲಭ್ಯದಲ್ಲಿ  ತಾನೆ  ಲಭ್ಯತೆಯ ಕುರಿತಾಗಿ ಸೆಣಸುವುದು ?  ಕತ್ತಲಲ್ಲಿ  ಕುಳಿತಾಗ ಬೆಳಕನ್ನು  ಹಂಬಲಿಸುತ್ತೇವೆ.

ಅದೇ ತಾನೆ ಅಲಭ್ಯ.ಆದ್ದರಿಂದಲೇ   ಬೆಳಗನ್ನು ಆ ದಿನದ ಲಭ್ಯತೆಯ ಆಶಯದೊಂದಿಗೆ ಆರಂಭಿಸುವುದು.

 ಇಂದು ನಮಗೆಟಕುವ  ಚಿಂತನೆಗಳು ಮಾತ್ರ ನಮ್ಮ ಮುಂದಿರುತ್ತವೆ.ಬಯಸಿದ್ದು ಸಿಗದಾಗ  ನಿರಾಸೆಯ

 ದುಃಖ ಆವರಿಸುವುದು. ಆದ್ದರಿಂದ  ಶುಭವನ್ನು ಬಯಸೋಣ. ಹಾರೈಸೋಣ.ಹಾಗಾದರೆ  ಆಸೆ ಪಡುವುದು

 ತಪ್ಪೇ?  ಖಂಡಿತ ಇಲ್ಲ. ನಮ್ಮ ಪರಿಧಿಯೊಳಗಣ  ಆಸೆ ತಪ್ಪಲ್ಲ. ಆಕಾಶವನ್ನೇ ಕೈಯೊಳಗೆ ಹಿಡಿಯುವ ಆಸೆ

  ಆಸೆಯಾಗದು .ಅತಿಯಾಸೆಯಾದೀತು. ತಾಸಿನಲ್ಲಿ ಭೂಮಿಯನ್ನೆಲ್ಲಾ ಸುತ್ತಲಾಗದು . ವ್ಯವಸ್ತಿತ

 ತಯಾರಿಗಳೊಂದಿಗೆ ಸಾದ್ಯವಾದೀತಲ್ಲವೇ?  ಅದೇ  ದೂರದರ್ಶಿತ್ವ .ರಾಜನೊಬ್ಬ ಕೋಟೆಯನ್ನು

ಗೆಲ್ಲಬೇಕಾದಾಗ   ಕೋಟೆಯಲ್ಲಿನ ಆಹಾರ ,ನೀರಿನ ಲಭ್ಯತೆಯನ್ನು ತುಂಡರಿಸಿದಾಗ  ಆತನು ಆ ಕೋಟೆಯನ್ನು

 ಗೆಲ್ಲಲುಮುನ್ನುಗ್ಗಬಹುದು. ಇಲ್ಲವಾದಲ್ಲಿ  ಕೋಟೆಯೊಳಗಿನ  ಸೈನ್ಯ ಬಗ್ಗದು .  ಇದನ್ನೇ ಜೀವನಕ್ಕೂ

 ಅನ್ವಯಿಸಬಹುದಲ್ಲವೇ? ನಮ್ಮೊಳಗಿನ  ದುರಾಸೆಗಳನ್ನುದೂರವಿಟ್ಟಾಗ ಮಾತ್ರ  ನಾವು ಜೀವನದಲ್ಲಿ

 ಗೆಲ್ಲಬಹುದು.

ಶುಭವಾಗಲಿ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನನ್ನ ಬ್ಲಾಗ್ ಪಟ್ಟಿ